Sunday, June 27, 2010

ತಿರುಪತಿ..ತಿರುಪತಿ..

ಸಾಮಾನ್ಯವಾಗಿ ಹಿಂದೂ ಯಾತ್ರ ಸ್ಥಳಗಳಲ್ಲಿ ಕಸ-ಗಲೀಜು ಎಲ್ಲ0ದರಲ್ಲಿ ಹಾಕ್ತಾರೆ ಅನ್ನುವ ದೂರಿದೆ. ಏನೂ ಮಾಡುವುದಕ್ಕೆ ಆಗಲ್ಲ ನಾವು  ಭಾರತೀಯರು. ವಿಶ್ವ ವಿಖ್ಯಾತ ದೇಗುಲ ತಿರುಪತಿಯಲ್ಲಿದೆ. ಸಾಮಾನ್ಯವಾಗಿ ಆ ನಾಮಧಾರಿ ಭಗವಂತನನ್ನು ಕಾಣಲು ಅಪಾರ ಸಂಖ್ಯೆಯ ಭಕ್ತರು ಬರ್ತಾ ಇರ್ತಾರೆ. ಜನ ಇದ್ದ ಕಡೆ ಕಸಕ್ಕೆನೂ  ಕೊರತೆ ಇಲ್ಲ. ಆದರು ಅಲ್ಲಿನ ನಗರ ಪಾಲಿಕೆಯವರು  ಊರನ್ನು ಶುದ್ಧವಾಗಿಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ತ್ಯಾಜ್ಯ ವಿಲೇವಾರಿಯ ಹಾಗೂ ಅಲ್ಲಿನ ಪ್ರಾಕೃತಿಕ ಸೌಂದರ್ಯ ಹೀಗಿದೆ...! ಇಲ್ಲಿ ನಾಮಧಾರಿ ದೇವ,ನಾಮ ಹಾಕುವ ಭಕ್ತರಲ್ಲದೆ  ಇವೆಲ್ಲವೂ ಇದೆ :-)
ಫೋಟೋ ತೆಗೆದಿದ್ದು :- ಜಿ.ವಿ. ರವೀಂದ್ರ 

Wednesday, May 12, 2010

ಬನ್ನೇರುಘಟ್ಟದಲ್ಲಿ ಅಂದು...!

ಕಲ್ಪ ಕ್ಯಾಮರದ ಕರಾಮತ್ತು..
ಚಂಪಕಧಾಮ ದೇಗುಲ ಬನ್ನೇರುಘಟ್ಟದ ಬಳಿ ಇರುವ ಅತ್ಯಂತ ಪುರಾತ ( ಸಾವಿರ ವರ್ಷಗಳಷ್ಟು ಹಳೆಯದು ಮತ್ತು ಚೋಳರಾಯ ಕಟ್ಟಿಸಿದ ದೇವಸ್ಥಾನ ;-)!! )ಹಾಗೂ ಸುಂದರ ದೇಗುಲ.. ಮೂಡ್ ಬಂದಾಗ ಹಾಯಾಗಿ ಹೋಗಿ ಬರುವಂತಹ ದೇಗುಲ, ಜೊತೆಗೆ ಹತ್ತಿರದಲ್ಲೇ ಇರುವ ಬನ್ನೇರುಘಟ್ಟದಲ್ಲಿರುವ  ಪ್ರಾಣಿಗಳಿಗೂ ಹಾಯ್ ಹೇಳಿ ಮನಸ್ಸಿಗೆ ಹಾಯ್ ಮಾಡಿ ಕೊಂಡು ಬರಬಹುದು..!

Friday, March 12, 2010

ಅಮೇರಿಕಾದ ಒಂದು ಊರಲ್ಲಿ ಇತ್ತೀಚೆಗೆ ಮಂಜು ಬಿದ್ದಾಗ ಹೀಗಿತ್ತು

ಪ್ರೀತಿಯಿಂದ ಫೋಟೋ ಕಳುಹಿಸಿದ್ದು :- ಡಾ.ಜಿ.ವಿ.ಕೃಷ್ಣವೇಣಿ